ಮಂಗಳವಾರ, ಸೆಪ್ಟೆಂಬರ್ 6, 2011

ಕೈದಿ ನಂಬರ್‌ 697 ಸತ್ಯ ಹೇಳುವುದು ಕಷ್ಟ, ಹೇಳದಿರುವುದು ಇನ್ನೂ ಕಷ್ಟ

ಸತ್ಯ ಏನೆಂಬುದು ಗೊತ್ತಿರುತ್ತದೆ. ಆದರೆ, ಹೇಳಲಾಗುವುದಿಲ್ಲ. ಭಂಡತನದಿಂದ ತನ್ನ ನಿರ್ಣಯವನ್ನು ಜಾರಿಗೊಳಿಸುವ ವ್ಯಕ್ತಿ ತ ಪ್ಪು ಮಾಡುತ್ತಿದ್ದಾನೆ ಎಂದು ತಿಳಿದಿದ್ದರೂ, ಅದನ್ನುಹೇಳಲಾಗುವುದಿಲ್ಲ.
ಹೆಲಿಕಾಪ್ಟರ್‌, ಐಶಾರಾಮಿ ಕಾರು, ಉಳಿಯಲು ಭವ್ಯ ಬಂಗಲೆ ಹೈಫೈ ಜೀವನ ನಡೆಸುತ್ತಿದ್ದ ಬಳ್ಳಾರಿ ಗಣಿಧಣಿ
ಮಾಜಿ ಸಚಿವ ಹಾಗೂ ಓಬಳಾಪುರಂ ಮೈನಿಂಗ್‌ ಕಂಪನಿಯ ಮಾಲೀಕ ಗಾಲಿ ಜನಾರ್ದನ ರೆಡ್ಡಿ ತಾವು ಇಷ್ಟು ಶೀಘ್ರ ಜೈಲು ಕಂಬಿ ಹಿಂದೆ ಹೋಗುವ ಬಗ್ಗೆ ಕನಸು ಮನಸಿನಲ್ಲೂ ಎಣಿಸಿರಲಿಲ್ಲ. ಇದೀಗ ಅದಿರು ಲೂಟಿ, ಗಡಿನಾಶ ಆರೋಪದಲ್ಲಿ ಬಂಧಿಯಾಗಿರುವ ರೆಡ್ಡಿ ಬಿಸ್ಕೆಟ್, ಕಿಚಡಿ ಸೇವನೆ ಮಾಡುವ ಮೂಲಕ ಜೈಲು ದಿನಚರಿ ಆರಂಭವಾಗಿದೆ.
ಅರಸರಂತಿದ್ದ ಜನಾರ್ದನ ರೆಡ್ಡಿ ಹೈದರಾಬಾದ್‌ನ ಚಂಚಲಗುಡ ಜೈಲಿನ ಸಿ ಕ್ಲಾಸ್‌ ಸೆಲ್‌ನಲ್ಲಿರುವ ಸಾಮಾನ್ಯ ಕೈದಿಗಳು. ಮಲಗಲು ಚಾಪೆ ಮತ್ತು ದಿಂಬು ನೀಡಲಾಗಿದ್ದು,
ಸಿ ದರ್ಜೆ ಸೆಲ್‌ನಲ್ಲಿರುವ ಇತರೆ 17 ಕೈದಿಗಳೊಂದಿಗೆ ಅವರನ್ನೂ ಇರಿಸಲಾಗಿದೆ ಎಂದು ತಿಳಿಸಿರುವ ಜೈಲಿನ ಅಧೀಕ್ಷಕರು, ಬಂಧಿತರಿಗೆ ಬ್ಲಾಕ್‌ ಅಂಡ್‌ ವೈಟ್‌ ಟಿವಿ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ತಮಗೆ ಇಂಗ್ಲಿಷ್‌ ಪೇಪರ್‌ ನೀಡುವಂತೆ ರೆಡ್ಡಿ ಅವರು ಸಲ್ಲಿಸಿದ್ದ ಕೋರಿಕೆಯನ್ನೂ ಜೈಲಿನ ಅಧಿಕಾರಿಗಳು ತಿರಸ್ಕರಿಸಿದ್ದಾರೆ.
ಚಂಚಲಗುಡ ಜೈಲಿನಲ್ಲಿರುವ ಜನಾರ್ದನ ರೆಡ್ಡಿಗೆ ಕೈದಿ ನಂಬರ್‌ 697 ನೀಡಲಾಗಿದೆ.